|
|
| ಪೇಶಾವರ ಬಾಂಬ್ ದಾಳಿಗೆ 30 ಬಲಿ |
| Webdunia | 16 ಗಂಟೆಗಳು ಕಳೆದಿವೆ |
| ಪೇಶಾವರದ ಹೊರವಲಯದ ವಾಣಿಜ್ಯ ಪ್ರದೇಶದ ಪೊಲೀಸ್ ಚೌಕಿ ಬಳಿ ನಡೆಸಿರುವ ಆತ್ಮಾಹುತಿ ಬಾಂಬ್ ದಾಳಿಯಲ್ಲಿ 30 ಮಂದಿ ಸತ್ತು 70 ಮಂದಿ ಗಾಯಗೊಂಡ ಘಟನೆ ಶನಿವಾರ ಸಂಭವಿಸಿದೆ. ಶಕ್ತಿಶಾಲಿ ಸ್ಫೋಟವು ಪೇಶಾವರದ ಬಡಾಬೆರ್ ಪ್ರದೇಶದಲ್ಲಿರುವ ಪೊಲೀಸ್ ಚೌಕಿಯನ್ನು ನಾಶಮಾಡಿದೆ ಮತ್ತು ಸಮೀಪದ ಎರಡು ಮಾರುಕಟ್ಟೆಗಳಿಗೆ ಮತ್ತು ಸುಮಾರು 15 ವಾಹನಗಳಿಗೆ ತೀವ್ರ ಹಾನಿಯುಂಟುಮಾಡಿದೆ.ಸ್ಫೋಟದಲ್ಲಿ ಸುಮಾರು 30 ಜನರು ಸತ್ತಿದ್ದಾರೆಂದು ಪೇಶಾವರ ಪೊಲೀಸ್ ಮುಖ್ಯಸ್ಥ ಮೊಹಮದ್ ಸುಲೇಮಾನ್ ತಿಳಿಸಿದರು. ಸತ್ತವರಲ್ಲಿ 6 ಮಂದಿ ಪೊಲೀಸರು ಮತ್ತು 13 ವರ್ಷವಯಸ್ಸಿನ ಬಾಲಕ ಕೂಡ ಸೇರಿದ್ದಾರೆ.ಅಧ್ಯಕ್ಷೀಯ ಚುನಾವಣೆಯಲ್ಲಿ ಪ್ರಾಂತೀಯ ಶಾಸಕರು ಮತ್ತು ಸಂಸತ್... |
| ಅಣುಒಪ್ಪಂದ ಅಂಗೀಕಾರಕ್ಕೆ ರೈಸ್ ಒತ್ತಾಯ |
| Webdunia | 21 ಗಂಟೆಗಳು ಕಳೆದಿವೆ |
| ಅಣು ಪೂರೈಕೆ ರಾಷ್ಟ್ರಗಳು ಭಾರತಕ್ಕೆ ವಿನಾಯಿತಿ ನೀಡಿದ ಬೆನ್ನಲ್ಲೇ, ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಕೊಂಡೊಲಿಜಾ ರೈಸ್, ಭಾರತದೊಂದಿಗಿನ ಅಣು ಒಪ್ಪಂದಕ್ಕೆ ಅಂಗೀಕಾರ ನೀಡುವಂತೆ ಅಮೆರಿಕ ಕಾಂಗ್ರೆಸ್ ಅನ್ನು ಒತ್ತಾಯಿಸಿದ್ದಾರೆ.ಒಪ್ಪಂದಕ್ಕೆ ಅಮೆರಿಕ ಕಾಂಗ್ರೆಸ್ ಅಂಗೀಕಾರ ನೀಡುವ ಕುರಿತು ತಾನು ಆಶಾವಾದ ಹೊಂದಿರುವುದಾಗಿ ನುಡಿದ ಅವರು, ಇದು ಭಾರತ ಮತ್ತು ಅಮೆರಿಕದ ಬಾಂಧವ್ಯದಲ್ಲಿ ಅತಿ ದೊಡ್ಡ ಹೆಜ್ಜೆಯಾಗಿದೆ ಎಂದು ನುಡಿದರು. ಅವರು ಉತ್ತರ ಆಫ್ರಿಕಾದ ಪ್ರವಾಸದ ವೇಳೆ ತುನಿಸಿಯಾದಿಂದ ಅಲ್ಜೀರಿಯಾಗೆ ಪ್ರವಾಸ ಮಾಡಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.ಅಮೆರಿಕ ಅಧ್ಯಕ್ಷೀಯ ಚುನಾವಣೆಗಳು ಸಮೀಪಿಸುತ್ತಿದ್ದು ಸ್ವಲ್ಪವೇ... |
| ಅಣುಬಂಧಕ್ಕೆ ಎನ್ಎಸ್ಜಿ 'ಗ್ರೀನ್ ಸಿಗ್ನಲ್' |
| Webdunia | 2 ದಿನಗಳು ಕಳೆದಿವೆ |
| ಭಾರತ ಮತ್ತು ಅಮೆರಿಕ ನಡುವಿನ ನಾಗರಿಕ ಪರಮಾಣು ಒಪ್ಪಂದಕ್ಕೆ ಕೊನೆಗೂ ಶನಿವಾರ ಮಧ್ನಾಹ್ನ ನಡೆದ ನಿರ್ಣಾಯಕ ಸಭೆಯಲ್ಲಿ ಎನ್ಎಸ್ಜಿ ಗ್ರೂಪ್ ಗ್ರೀನ್ ಸಿಗ್ನಲ್ ನೀಡುವ ಮೂಲಕ ಭಾರತದ 34 ವರ್ಷಗಳ ಹೋರಾಟಕ್ಕೆ ಜಯ ದೊರೆದಂತಾಗಿದೆ.ಅಣು ಒಪ್ಪಂದಕ್ಕೆ ಮುಂದುವರಿಯಲು 45 ದೇಶಗಳ ಒಮ್ಮತಾಭಿಪ್ರಾಯಕ್ಕಾಗಿ ವಿಯೆನ್ನಾದಲ್ಲಿ ಗುರುವಾರ ಆರಂಭಗೊಂಡ ಪರಮಾಣು ಸಾಮಾಗ್ರಿ ಪೂರೈಕೆದಾರರ ಗುಂಪಿನ(ಎನ್ಎಸ್ಜಿ) ಮೂರು ದಿನಗಳ ಸಭೆ ಇಂದು ಅಂತಿಮಗೊಂಡಂತಾಗಿದೆ.ಅಲ್ಲದೇ ಎನ್ಎಸ್ಜಿ ಕರಡಿನಲ್ಲಿ ಯಾವುದೇ ಹೆಚ್ಚಿನ ಬದಲಾವಣೆ ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ. ಇಂದು ಮಧ್ನಾಹ್ನ ನಡೆದ ಸಭೆಯಲ್ಲಿ, ಅಣುಬಂಧದ ವಿಚಾರಕ್ಕೆ ಸಂಬಂಧಿಸಿದಂತೆ ಭಾರತ ಕಾನೂನಿನ... |
|
|
|
| ರಾಷ್ಟ್ರದ ಹಿತಾಸಕ್ತಿಯ ಶರಣಾಗತಿ: ಕಾರಟ್ |
| Webdunia | 14 ಗಂಟೆಗಳು ಕಳೆದಿವೆ |
| ಭಾರತಕ್ಕೆ ಅಣು ವ್ಯಾಪಾರಕ್ಕೆ ಅನುಕೂಲವಾಗುವಂತೆ ಎನ್ಎಸ್ಜಿ ನೀಡಿರುವ ವಿನಾಯಿತಿಯನ್ನು ರಾಷ್ಟ್ರದ 'ಇನ್ನೊಂದು ಶರಣಾಗತಿ' ಎಂಬುದಾಗಿ ಹೇಳಿರುವ ಸಿಪಿಎಂ, ಅಣು ಒಪ್ಪಂದದ ವಿರುದ್ಧದ ತನ್ನ ಹೋರಾಟ ಮುಂದುವರಿಯಲಿದೆ ಎಂದು ಹೇಳಿದೆ.ನಮ್ಮ ರಾಜಕೀಯ ಯುದ್ಧವು ಇಲ್ಲಿಯೇ ಆಗಿದ್ದು, ಅದು ವಿಯೆನ್ನಾ ಅಥವಾ ವಾಶಿಂಗ್ಟನ್ನಲ್ಲಿ ಅಲ್ಲ. ನಾವು ಈ ಹಿಂದೆ ಅಣುಒಪ್ಪಂದವನ್ನು ವಿರೋಧಿಸಿದ್ದೆವು. ಇದೀಗ ಆಡಳಿತಾರೂಢ ಮೈತ್ರಿಕೂಟವನ್ನು ವಿರೋಧಿಸುತ್ತಿದ್ದೇವೆ. 123 ಒಪ್ಪಂದವನ್ನು ವಿರೋಧಿಸುವ ಸರಕಾರವನ್ನು ನಾವು ಅಧಿಕಾರದಲ್ಲಿ ನೋಡಲು ಇಚ್ಛಿಸುತ್ತೇವೆ ಎಂದು ಸಿಪಿಎಂ ಪ್ರತಿಕ್ರಿಯಿಸಿದೆ.ಮುಂದಿನ ಚುನಾವಣೆಯ ಬಳಿಕ ನಮ್ಮ ಗುರಿಯು, ಹೊಸ ಸರಕಾರವು... |
| ಒಪ್ಪಂದದ ಅನುಷ್ಠಾನ ವಿಳಂಬ: ಅಮರನಾಥ ಸಮಿತಿ ಎಚ್ಚರಿಕೆ |
| Yahoo | 2 ದಿನಗಳು ಕಳೆದಿವೆ |
| ಅಮರನಾಥ ದೇವಸ್ಥಾನ ಮಂಡಳಿಗೆ ಭೂಮಿಯನ್ನು ಹಸ್ತಾಂತರಿಸುವುದಕ್ಕಾಗಿ ಎರಡು ತಿಂಗಳುಗಳ ಕಾಲ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸಂಘರ್ಷ ಸಮಿತಿ ಮತ್ತು ಜಮ್ಮು ಕಾಶ್ಮೀರ ಸರಕಾರದ ನಡುವೆ ಬರಲಾದ ಒಪ್ಪಂದವನ್ನು ಅನುಷ್ಠಾನಗೊಳಿಸುವಲ್ಲಿ ವಿಳಂಬವಾಗಕೂಡದು ಎಂಬುದಾಗಿ ಕೋರಿರುವ ಸಂಘರ್ಷ ಸಮಿತಿ, ಯಾವುದೇ ರೀತಿಯ ಕಾಲ ಹರಣ ಪ್ರತಿಭಟನೆಯನ್ನು ಅನಿವಾರ್ಯಗೊಳಿಸುತ್ತದೆ ಎಂದು ಎಚ್ಚರಿಕೆ ನೀಡಿದೆ.ದೇವಸ್ಥಾನ ಮಂಡಳಿಗೆ ಭೂಮಿಯನ್ನು ಮರುಹಸ್ತಾಂತರಿಸುವ ಮೂಲ ವಿಷಯವನ್ನು ಸರಕಾರ ಅಖೈರುಗೊಳಿಸಿದ್ದರೂ, ಪ್ರತಿಭಟನೆ ಜತೆಗಿನ ಸಹ ಸಂಬಂಧಿತ ವಿಷಯಗಳಾಗಿ ಅಧಿಕಾರಿಗಳು ವಿಳಂಬ ಮಾಡುತ್ತಿದ್ದಾರೆ ಎಂದು ಶ್ರೀ ಅಮರನಾಥ ಸಂಘರ್ಷ ಸಮಿತಿ ವಕ್ತಾರ ನರಿಂದರ್... |
| ಡೇರಾ ಸಚ್ಚಾ ಮುಖ್ಯಸ್ಥ ವಿರುದ್ಧ ಅತ್ಯಾಚಾರ ಆರೋಪ |
| Webdunia | 20 ಗಂಟೆಗಳು ಕಳೆದಿವೆ |
| ಡೇರಾ ಸಚ್ಚಾ ಸೌದ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಂ ಅವರ ಮೇಲೆ ಸ್ಥಳೀಯ ಕೋರ್ಟೊಂದು ಹತ್ಯೆ ಮತ್ತು ಅತ್ಯಾಚಾರದ ದೋಷಾರೋಪ ಹೊರಿಸಿದ್ದು, ಅಕ್ಟೋಬರ್ ನಾಲ್ಕರಂದು ಮುಂದಿನ ವಿಚಾರಣೆ ನಡೆಸಲಿದೆ.ಕಳೆದ ಎರಡು ವಿಚಾರಣೆ ಸಂದರ್ಭದಲ್ಲಿ ಹಾಜರಿರದಿದ್ದ ಡೇರಾ ಮುಖ್ಯಸ್ಥ ಶನಿವಾರ ಕೋರ್ಟ್ನಲ್ಲಿ ಉಪಸ್ಥಿತರಿದ್ದರು. 1999ರಲ್ಲಿ ಡೇರಾದ ಸಾಧ್ವಿಯ ಘಟನೆಗೆ ಸಂಬಂಧಿಸಿದಂತೆ ಡೇರಾ ಮುಖ್ಯಸ್ಥರ ವಿರುದ್ಧ ಅತ್ಯಾಚಾರದ ದೋಷಾರೋಪ ಹೊರಿಸುವಂತೆ ಸಿಬಿಐ ಕೋರ್ಟ್ ಆದೇಶ ನೀಡಿತ್ತು.ಈ ಪ್ರಕರಣದಲ್ಲಿ ಗುರ್ಮಿತ್ ರಾಮ್ ಮಾತ್ರ ಆರೋಪಿಯಾಗಿದ್ದರು. ಸಿರ್ಸಾ ಪತ್ರಕರ್ತ ರಾಮ್ ಚಂದರ್ ಚತ್ರಪತಿ ಮತ್ತು ಮಾಜಿ ಡೇರಾ ಮ್ಯಾನೇಜರ್ ರಂಜೀತ್ ಸಿಂಗ್ ಹತ್ಯೆಗಳಿಗೆ... |
|
|
|
| ಎನ್ಎಸ್ಜಿ ವಿನಾಯಿತಿಗೆ ಇಂಡಿಯಾ ಇಂಕ್ ಸ್ವಾಗತ |
| Webdunia | 19 ಗಂಟೆಗಳು ಕಳೆದಿವೆ |
| ಭಾರತದೊಂದಿಗೆ ಪರಮಾಣು ವ್ಯವಹಾರಕ್ಕೆ ವಿನಾಯಿತಿ ನೀಡಿರುವ ಎನ್ಎಸ್ಜಿ ಕ್ರಮವನ್ನು ಸ್ವಾಗತಿಸಿರುವ ಭಾರತದ ಮುಂಚೂಣಿಯ ಔದ್ಯಮಿಕ ಮಂಡಳಿಗಳು, ಇದರಿಂದಾಗಿ ರಾಷ್ಟ್ರವು ಮುಂದಿನ 10-15 ವರ್ಷಗಳಲ್ಲಿ 40 ಶತಕೋಟಿ ಡಾಲರ್ ಹೂಡಿಕೆಯನ್ನು ಆಕರ್ಷಿಸಲಿದೆ ಎಂದು ಹೇಳಿವೆ.ಭಾರತದೊಂದಿಗೆ ಅಣು ವ್ಯಾಪಾರವನ್ನು ಮುಂದುವರಿಸುವ 45 ರಾಷ್ಟ್ರಗಳ ಸದಸ್ಯತ್ವದ ಅಣು ಪೂರೈಕೆ ಸಮೂಹದ ನಿರ್ಧಾರದಿಂದಾಗಿ ಸುಮಾರು 400 ಭಾರತೀಯ ಮತ್ತು ವಿದೇಶಿ ಸಂಸ್ಥೆಗಳು ಪ್ರಯೋಜನ ಪಡೆಯಲಿವೆ.ಅಣು ಒಪ್ಪಂದದಲ್ಲಿ ಮುಂದುವರಿಕೆಯು, ಇಂಧನ ಪೂರೈಕೆಯ ಖಚಿತತೆಯಲ್ಲಿ ಅಣು ಸ್ಥಾವರಗಳ ಸ್ಥಾಪನೆಯ ಸೂಚನೆ ನೀಡಿದೆ ಎಂದು ಭಾರತೀಯ ಚೇಂಬರ್ಸ್ ಆಫ್ ಕಾಮರ್ಸ್ ಒಕ್ಕೂಟದ ಪ್ರಧಾನ... |
| ಪೂಸಾ 1121 ಅಕ್ಕಿ ರಫ್ತಿಗೆ ಸರಕಾರ ಅನುಮತಿ |
| Webdunia | 2 ದಿನಗಳು ಕಳೆದಿವೆ |
| ಪುಸಾ 1121 ಮಾದರಿಯ ಅಕ್ಕಿಯನ್ನು ಅಕ್ಟೋಬರ್ 15ರಿಂದ ರಫ್ತು ಮಾಡಲು ಸರಕಾರವು ಅನುಮತಿ ನೀಡಿದೆ ಎಂದು ಹಿರಿಯ ಸರಕಾರಿ ಅಧಿಕಾರಿಗಳು ತಿಳಿಸಿದ್ದಾರೆ.ಅಕ್ಟೋಬರ್ 15ರಿಂದ ಪುಸಾ 1121 ಅಕ್ಕಿಯನ್ನು ವಿದೇಶಗಳಲ್ಲಿ ಅದರಲ್ಲೂ ಮುಖ್ಯವಾಗಿ ಕೊಲ್ಲಿ ರಾಷ್ಟ್ರಗಳಿಗೆ ರಫ್ತು ಮಾಡಲಾಗುವುದು ಎಂದು ಕೃಷಿ ಮತ್ತು ಸಂಸ್ಕರಣ ಆಹಾರ ಉತ್ಪನ್ನ ರಫ್ತು ಅಭಿವೃದ್ಧಿ ಮಂಡಳಿ(ಅಪೆಡಾ)ದ ಹಿರಿಯ ಅಧಿಕಾರಿಗಳು ಹೇಳಿದ್ದಾರೆ.ಬಾಸ್ಮತಿ ಅಕ್ಕಿಯಷ್ಟೇ ಗುಣಮಟ್ಟವನ್ನು ಹೊಂದಿರುವ ಪೂಸಾ 1121 ಅಕ್ಕಿ ರಫ್ತು ಮಾಡುವ ವ್ಯಾಪಾರಿಗಳು ಅಪೆಡಾದೊಂದಿಗೆ ಅಕ್ಟೋಬರ್ 15ರೊಳಗೆ ನೋಂದಣಿ ಮಾಡಿಕೊಳ್ಳಬಹುದಾಗಿದೆ.ಪುಸಾ 1121 ಅಕ್ಕಿಯನ್ನು ಮುಖ್ಯವಾಗಿ ಭಾರತದ ಎರಡು ಪ್ರಮುಖ... |
| ನ್ಯಾನೋಗೆ ಜಾರ್ಖಂಡ್ಗೆ ಆಹ್ವಾನ |
| Webdunia | 2 ದಿನಗಳು ಕಳೆದಿವೆ |
| ಜಮೀನು ಮತ್ತು ಇತರ ಸೌಲಭ್ಯಗಳನ್ನು ನೀಡುವ ಭರವಸೆಯೊಂದಿಗೆ, ನ್ಯಾನೋ ಕಾರು ಸ್ಥಾವರನ್ನು ರಾಜ್ಯದಲ್ಲಿ ಪ್ರಾರಂಭಿಸಲು ಟಾಟಾ ಮೋಟಾರ್ಸ್ಗೆ ಆಮಂತ್ರಣ ನೀಡಿರುವುದಾಗಿ ಜಾರ್ಖಂಡ್ ಉಪಮುಖ್ಯಮಂತ್ರಿ ಸುಧೀರ್ ಮಹ್ತೋ ತಿಳಿಸಿದ್ದಾರೆ. ಅಲ್ಲದೆ, ಈ ಕುರಿತಾಗಿ ಟಾಟಾ ಮೋಟಾರ್ಸ್ ಅಧ್ಯಕ್ಷ ರತನ್ ಟಾಟಾ ಅವರಿಗೆ ಎರಡು ದಿನಗಳೊಳಗೆ ಪತ್ರವನ್ನು ಕಳುಹಿಸಲಾಗುವುದು ಎಂದು ಹೇಳಿದ್ದಾರೆ.ಟಾಟಾ ಮೋಟಾರ್ಸ್, ನ್ಯಾನೋ ಕಾರು ಸ್ಥಾವರ ಸ್ಥಾಪನೆಗಾಗಿ ಬೇರೆಲ್ಲಿಗೂ ಹೋಗಬೇಕಾಗಿಲ್ಲ. ಒಂದು ವೇಳೆ ಟಾಟಾ ಮೋಟಾರ್ಸ್ ಬಯಸಿದಲ್ಲಿ, ಜಮೀನು ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಟಾಟಾ ಮೋಟಾರ್ಸ್ ನೀಡುವುದಾಗಿ ಜಾರ್ಖಂಡ್ ಮುಖ್ಯಮಂತ್ರಿ ಶಿಬು ಸೊರೇನ್ ಈಗಾಗಲೇ... |
|
|
|
| ವಿಶ್ವನಾಥನ್ ಗೆಲುವಿಗೆ ಮತ್ತೊಮ್ಮೆ ವಿಘ್ನ |
| Webdunia | 16 ಗಂಟೆಗಳು ಕಳೆದಿವೆ |
| ಬಿಲ್ಬಾವೋ ಚೆಸ್ ಪಂದ್ಯಾವಳಿಯನ್ನು ಗೆಲ್ಲುವ ಚೆಸ್ ಮಾಸ್ಟರ್ ವಿಶ್ವನಾಥನ್ ಆನಂದ್ ಕನಸಿಗೆ ಮತ್ತೆ ತಡೆಯುಂಟಾಗಿದೆ. ಪಂದ್ಯಾವಳಿಯ ಐದನೆ ಸುತ್ತಿನಲ್ಲಿ ಮ್ಯಾಗ್ನಸ್ ಕಾರ್ಲ್ಸನ್ ವಿರುದ್ಧ ಪಂದ್ಯವನ್ನು ಅವರು ಡ್ರಾ ಮಾಡಿಕೊಂಡಿದ್ದಾರೆ.ವರ್ಗ 22ರ ಪಂದ್ಯಾವಳಿಯ ಐದನೆ ಸುತ್ತಿನ ಎಲ್ಲಾ ಪಂದ್ಯಗಳೂ ಡ್ರಾದಲ್ಲಿ ಮುಕ್ತಾಯಗೊಂಡಿದ್ದು, ಆಟಗಾರರ ಸ್ಥಾನದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಬಲ್ಗೇರಿಯಾದ ಟೊಪಲಾವ್ ಅವರು ತನ್ನ ಪ್ರಥಮ ಸ್ಥಾನವನ್ನು ಕಾಯ್ದುಕೊಂಡಿದ್ದಾರೆ.ಪಂದ್ಯಕ್ಕೆ ಫುಟ್ಬಾಲ್ ಮಾದರಿಯಲ್ಲಿ ಅಂಕಗಳನ್ನು ನೀಡಲಾಗುತ್ತದೆ. ಗೆಲುವಿಗೆ ಮೂರು ಅಂಕಗಳನ್ನು ನೀಡಿದರೆ, ಪಂದ್ಯ ಡ್ರಾ ಮಾಡಿಕೊಂಡಲ್ಲಿ ಒಂದು ಅಂಕ ನೀಡಲಾಗುತ್ತದೆ.ಟೊಪಲಾವ್... |
| ಬಾಂಗ್ಲವನ್ನು ಹೀನಾಯವಾಗಿ ಸೋಲಿಸಿದ ಆಸಿಸ್ |
| Webdunia | 16 ಗಂಟೆಗಳು ಕಳೆದಿವೆ |
| ಡಾರ್ವಿನ್: ಇಲ್ಲಿನ ಟಿಐಒ ಸ್ಟೇಡಿಯಂನಲ್ಲಿ ಶನಿವಾರ ನಡೆದ ಆಸ್ಟ್ರೇಲಿಯ ವಿರುದ್ಧ ಏಕದಿನದ ಸರಣಿಯಲ್ಲಿ ಬಾಂಗ್ಲಾದೇಶ ಸೋಲನುಭವಿಸಿದೆ. ಪ್ರವಾಸಿ ತಂಡವು ಆಥಿತೇಯರನ್ನು ನಿಗದಿತ 50 ಓವರುಗಳಲ್ಲಿ 5 ವಿಕೆಟ್ ಕಬಳಿಸಿ 198ಕ್ಕೆ ನಿಯಂತ್ರಿಸಿದ್ದರೂ, ಇದರಲಾಭ ಪಡೆಯಲು ವಿಫಲವಾದ ಬಾಂಗ್ಲಾ ತಂಡ ಕೇವಲ 29.5 ಓವರುಗಳಲ್ಲಿ 125 ರನ್ ಗಳಿಸಿ ತನ್ನೆಲ್ಲ ವಿಕೆಟ್ ಕಳೆದುಕೊಂಡು ಹೀನಾಯ ಸೋಲು ಕಂಡಿತು.ರನ್ ಗೆಲುವಿನಿಂದ ಮೂರು ಪಂದ್ಯಗಳ ಸರಣಿಯಲ್ಲಿ ಆಸ್ಟ್ರೇಲಿಯ ಬಾಂಗ್ಲಾದೇಶವನ್ನು ಧೂಳೀಪಟ ಮಾಡಿದ್ದು, ಬಾಂಗ್ಲಾ ಬ್ಯಾಟಿಂಗ್ ಅಂತಾರಾಷ್ಟ್ರೀಯ ತಂಡಕ್ಕೆ ಅಗತ್ಯವಾದ ಗುಣಮಟ್ಟಕ್ಕಿಂತ ಕಡಿಮೆಯಾಗಿದೆ. ಆಸ್ಟ್ರೇಲಿಯ ವಿರುದ್ಧ ಮೊದಲ ಪಂದ್ಯದಲ್ಲಿ... |
| ಇರಾನಿ ಕಪ್ನಲ್ಲಿ ಆಡಲಿರುವ ಸಚಿನ್ |
| Webdunia | 18 ಗಂಟೆಗಳು ಕಳೆದಿವೆ |
| ಶ್ರೀಲಂಕಾ ವಿರುದ್ಧದ ಮೂರು ಟೆಸ್ಟ್ಗಳಲ್ಲಿ ಕಳಪೆ ಪ್ರದರ್ಶನ ತೋರಿದ ಸಚಿನ್ ಇದೀಗ ಪಾರ್ಮ್ ಬಳಿಕ ಇದೀಗ ಫಿಟ್ನೆಸ್ ಕಂಡುಕೊಂಡಿದ್ದು, ಈ ತಿಂಗಳ ಅಂತ್ಯದಲ್ಲಿ ವಡೋದರಾದಲ್ಲಿ ನಡೆಯಲಿರುವ ಇರಾನಿ ಕಪ್ನಲ್ಲಿ ಭಾಗವಹಿಸಲಿದ್ದಾರೆ.ತಾನು ಇರಾನಿ ಟ್ರೋಫಿಯಲ್ಲಿ ಭಾಗವಹಿಸುತ್ತಿದ್ದೇನೆ. ತಾನು ಈಗ ದೈಹಿಕವಾಗಿ ಸಮರ್ಥನಿದ್ದೇನೆ ಎಂದು ಮಾಸ್ಟರ್ ಬ್ಲಾಸ್ಟರ್ ತೆಂಡುಲ್ಕರ್ ಉತ್ಪನ್ನವೊಂದರ ಪ್ರಚಾರ ಕಾರ್ಯಕ್ರಮದ ವೇಳೆ ತಿಳಿಸಿದ್ದಾರೆ.ಸೆಪ್ಟೆಂಬರ್ 24-28ರಲ್ಲಿ ಕಳೆದ ವರ್ಷದ ರಣಜಿ ಟ್ರೋಫಿ ಚಾಂಪಿಯನ್ (ದಿಲ್ಲಿ) ಮತ್ತು ಭಾರತದ ಇತರ ತಂಡದ ನಡುವೆ ನಡೆಯುವ ವಾರ್ಷಿಕ ಪಂದ್ಯಕ್ಕಾಗಿ ಆಯ್ಕೆದಾರರು ಸೋಮವಾರದಂದು ಬಹುತೇಕ ಟೆಸ್ಟ್ ತಂಡವನ್ನು... |
|
|
|
| ಮನೆಮಂದಿ ಒಟ್ಟಿಗೆ ಕೂತು ನೋಡೊ ಗಣೇಶನ ಚಿತ್ರ |
| Oneindia | 21 ಗಂಟೆಗಳು ಕಳೆದಿವೆ |
| ವಿಮರ್ಶೆಗೂ ಮುನ್ನ ನಿಮಗೊಂದು ಪ್ರಶ್ನೆ: ಇತ್ತೀಚಿನ ದಿನಗಳಲ್ಲಿ ಹೊಟ್ಟೆ ತುಂಬಾ ನಕ್ಕು, ಎಂಜಾಯ್ ಮಾಡಿದ ಸಿನಿಮಾ ಒಂದಾದರೂ ಇದೆಯಾ? ಯೋಚಿಸುವ ಅಗತ್ಯವೇ ಬೇಡ. ಸುಮ್ಮನೇ ಆಕಡೆ ಈಕಡೆ ತಲೆ ಅಲ್ಲಾಡಿಸಿಬಿಡಿ ಸಾಕು. ಹೌದು, ಅದೇ ಕಾಲೇಜು ಸ್ಟೋರಿ, ಅದೇ ವಾಕರಿಕೆ ಬರುವ ರೌಡಿಸಂ ಸ್ಟೋರಿ ಹಾಗಂತ ಅದರಲ್ಲಿ ಬಹುತೇಕ ಹಿಟ್ ಆಗಿಲ್ಲವಾ ಅಂತ ಕೇಳಬೇಡಿ. ಆದರೆ ಮನೆಮಂದಿ ಒಟ್ಟೊಟ್ಟಿಗೇ ಕುಳಿತು ನೋಡಿದ ಸಿನಿಮಾ ಯಾವುದಿದೆ ? ಉತ್ತರ : `' ಆದರೆ ಈ ಪ್ರಶ್ನೆಗೆ ತಕ್ಕಮಟ್ಟಿಗೆ ಹೊಂದಾಣಿಕೆಯಾಗಬಲ್ಲ ಉತ್ತರವೊಂದು ಲಭ್ಯವಾಗಿದೆ. ಅದೇ `ಗಣೇಶ ಮತ್ತೆ ಬಂದ'. ಒಂದು ಫ್ಯಾಮಿಲಿ ಸಿನಿಮಾ ಹೇಗಿರಬೇಕು? ಅದು ಹೀಗೇ ಇರಬೇಕು ಎಂದು ನಿರೂಪಿಸಿದ್ದಾರೆ... |
| ನನಸಾದ ಕುಮಾರ್ ಕನಸು |
| Webdunia | 2 ದಿನಗಳು ಕಳೆದಿವೆ |
| ಚಿತ್ರ ನಟರನ್ನು ನೋಡಿ ಪ್ರೇರಿತಗೊಂಡು ಹಲವರು ಚಿತ್ರರಂಗಕ್ಕೆ ಎಂಟ್ರಿಯಾಗುತ್ತಾರೆ. ಆದರೆ ಯಶಸ್ಸು ಗಳಿಸುವರು ಕೆಲವರು ಮಾತ್ರ. ಇದೀಗ ಕುಮಾರ್ 'ಕನಸೊಂದು ಶುರುವಾಯಿತಈ ಮೊದಲು ಹಲವು ಸಣ್ಣ ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ಕುಮಾರ್ ಈ ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕರಾಗಿ ಅಭಿನಯಿಸುತ್ತಿದ್ದಾರೆ. ಕರಿಯ ಚಿತ್ರದಲ್ಲಿ ಪುಟ್ಟ ಪಾತ್ರ ಮಾಡಿದ್ದ ಕುಮಾರ್ ಅವರ ನಟನೆ ನೋಡಿ ನಿರ್ಮಾಪಕ, ನಿರ್ದೇಶಕ ಎಸ್. ನಾರಾಯಣ್ ತಮ್ಮ ಚಂಡ ಚಿತ್ರದಲ್ಲಿ ಮತ್ತೊಂದು ಪಾತ್ರ ನೀಡಿದರು.ಹೀಗೆ ನಟನಾಗುವ ಕನಸು ಹೊತ್ತಿದ್ದ ಕುಮಾರ್, ನಿರ್ದೇಶಕ ಓಂ ಪ್ರಕಾಶ್ ರಾವ್ ಕಣ್ಣಿಗೆ ಬಿದ್ದರು. ತಾವು ನಿರ್ಮಿಸುತ್ತಿರುವ ಮುಂದಿನ ಚಿತ್ರಕ್ಕೆ ಓಂ... |
| ಕುಮಾರು ಕನಸು ನನಸು |
| Yahoo | 2 ದಿನಗಳು ಕಳೆದಿವೆ |
| ಚಿತ್ರನಟರನ್ನು ನೋಡಿ ಪ್ರೇರಿತಗೊಂಡು ಹಲವರು ಚಿತ್ರರಂಗಕ್ಕೆ ಎಂಟ್ರಿಯಾಗುತ್ತಾರೆ. ಆದರೆ ಯಶಸ್ಸು ಗಳಿಸುವರು ಕೆಲವರು ಮಾತ್ರ. ಇದೀಗ ಕುಮಾರ್ ನಾಯಕ ನಟರಾಗಿ 'ಕನಸೊಂದು ಶುರುವಾಯಿತು' ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ.ಈ ಮೊದಲು ಹಲವು ಸಣ್ಣ ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ಕುಮಾರ್ ಈ ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕರಾಗಿ ಅಭಿನಯಿಸುತ್ತಿದ್ದಾರೆ. ಕರಿಯ ಚಿತ್ರದಲ್ಲಿ ಪುಟ್ಟ ಪಾತ್ರ ಮಾಡಿದ್ದ ಕುಮಾರ್ ನಟನೆ ನೋಡಿ ನಿರ್ಮಾಪಕ, ನಿರ್ದೇಶಕ ಎಸ್. ನಾರಾಯಣ್ ತಮ್ಮ ಚಂಡ ಚಿತ್ರದಲ್ಲಿ ಮತ್ತೊಂದು ಪಾತ್ರ ನೀಡಿದರು.ಹೀಗೆ ನಟನಾಗುವ ಕನಸು ಹೊತ್ತಿದ್ದ ಕುಮಾರ್ ನಿರ್ದೇಶಕ ಓಂ ಪ್ರಕಾಶ್ ರಾವ್ ಕಣ್ಣಿಗೆ... |
|
|
|
| ಸರ್ವತೋಮುಖ ಶಿವನು ಐಮೊಗನಾದಾಗ |
| Oneindia | 2 ದಿನಗಳು ಕಳೆದಿವೆ |
| ಭಗವಂತನ ಔಪಾಸನೆಯಲ್ಲಿ ಎರಡು ಬಗೆ. ದೇವರು ನಾಮ-ರೂಪರಹಿತನಾದ ಸರ್ವಾಂತರ್ಯಾಮಿ, ಸರ್ವವ್ಯಾಪಿ, ಸರ್ವಶಕ್ತ- ಎಂದುಕೊ೦ಡು ಸಾಗುವುದು ನಿರ್ಗುಣೋಪಾಸನೆ. ಸತ್ ಚಿತ್ ಆನಂದದ ಈ ಅಪೂರ್ವ ಅನನ್ಯ ಅನುಭವ ಪಡೆಯಲು ತನ್ನನ್ನು ತೊಡಗಿಸಿಕೊಂಡು, ಒಬ್ಬ ಸಾಧಕ ಹಲವು ಮಜಲುಗಳನ್ನು ದಾಟಿ ಅವನ ಹತ್ತಿರ ಹೋಗ ಬಯಸುತ್ತಾನಷ್ಟೆ? ಸಾಲೋಕ್ಯ (ಆ ದಿವ್ಯ ಪರಿಸರವನ್ನು ಹೊಕ್ಕ ಅನುಭವ ಗಳಿಸುವುದು), ಸಾಮೀಪ್ಯ (ಅವನ ಸನಿಹದಲ್ಲಿ ಇದ್ದಂತಾಗುವುದು), ಸಾನ್ನಿಧ್ಯ (ತನ್ನ ಹಿಂದೆ ಮುಂದೆ ಅಕ್ಕ ಪಕ್ಕದಲ್ಲೇ ಅವನು ಇದ್ದಂತೆ ಭಾಸವಾಗುವುದು), ಸಾಯುಜ್ಯ (ಅವನೊಂದಿಗೆ ಮಿಳಿತಗೊಳ್ಳುವುದು)- ಎಂಬ ಗುರಿಯ ಭಕ್ತಿಮಾರ್ಗದ ಬೆಟ್ಟ ಹತ್ತಿ ಮೇಲೆ ಮೇಲೇರಿ ನಡೆಯುವಾಗ,... |
| ಯೋಗಾಸನ ವಿಶಾರದ ಕೆ. ಪಟ್ಟಾಭಿ ಜೋಯಿಸ್ |
| Oneindia | 2 ದಿನಗಳು ಕಳೆದಿವೆ |
| *** 20ನೆಯ ಶತಮಾನದಲ್ಲಿ ಕರ್ನಾಟಕ ಕಂಡ ಇಬ್ಬರು ಮಹಾನ್ ಯೋಗಪಿತಾಮಹರೆಂದರೆ ಮೈಸೂರಿನ ತಿರುಮಲೆ ಕೃಷ್ಣಮಾಚಾರ್ಯರು ಮತ್ತು ಮಲ್ಲಾಡಿಹಳ್ಳಿಯ ಆಯುರ್ವೇದ-ಯೋಗಗಳ ಸವ್ಯಸಾಚಿ ರಾಘವೇಂದ್ರಸ್ವಾಮಿಗಳು. ಕೃಷ್ಣಮಾಚಾರ್ಯರ ಶಿಷ್ಯರು ಅಂತಾರಾಷ್ಟ್ರೀಯ ಖ್ಯಾತಿಯನ್ನು ಪಡೆದಿದ್ದಾರೆ. ಮೀಮಾಂಸಾತೀರ್ಥ, ವೇದಾಂತವಾಗೀಶ, ಸಾಂಖ್ಯಯೋಗ ಶಿಖಾಮಣಿ ಇತ್ಯಾದಿ ಬಿರುದಾಂಕಿತ ತಿರುಮಲೆ ಕೃಷ್ಣಮಾಚಾರ್ಯರು ಜಗತ್ತನ್ನೇ ಬೆರಗುಗೊಳಿಸಿದ ನಾಲ್ಕು ಯೋಗಶಿಕ್ಷಕರನ್ನು ತಯಾರಿಸಿದ ಪುಣ್ಯಭಾಜನರಾಗಿದ್ದಾರೆ. ಅವರ ಶಿಷ್ಯರು- ಬಿ.ಕೆ.ಎಸ್.ಅಯ್ಯಂಗಾರ್(ಅವರ ಭಾವ ಮೈದುನ), ಪಟ್ಟಾಭಿ ಜೋಯಿಸ್(ಆಪ್ತ ಶಿಷ್ಯ), ದೇಶಿಕಾಚಾರ್ಯ(ಪುತ್ರ) ಹಾಗೂ ದೇವಿ(ಆಂಗ್ಲ ಶಿಷ್ಯೆ, ಯೋಗಶಿಕ್ಷಕಿ). |
| ಕೈ ಇಲ್ಲ, ಕಾಲಿಲ್ಲ, ಚಿಂತೆನೂ ಇಲ್ಲ! |
| Oneindia | 4 ದಿನಗಳು ಕಳೆದಿವೆ |
| ಅಲ್ಲ, ಕೈ-ಕಾಲುಗಳೇ ಇಲ್ಲದಿದ್ದರೂ ಆತ ಇಂಥದೊಂದು ಸಾಧನೆ ಮಾಡಲು ಸಾಧ್ಯವಾದದ್ದು ಹೇಗೆ? ಅಂಗವೈಕಲ್ಯದ ನೋವು, ಜತೆಗಿದ್ದವರ ವ್ಯಂಗ್ಯ, ಬಂಧುಗಳ ‘ಪಾಪ ಕಣ್ರೀ' ಎಂಬಂಥ ನೋಟ, ಕುತೂಹಲಿಗಳ ಅರ್ಥವಿಲ್ಲದ ಪ್ರಶ್ನೆ, ಒಂದು ಡಿಪ್ರೆಷನ್, ವಿಚಿತ್ರ ದೇಹ ಪ್ರಕೃತಿಯ ಕಾರಣದಿಂದಲೇ ಜತೆಯಾಗುವ ಕಾಯಿಲೆಗಳು ಅವನನ್ನು ಹೆದರಿಸಲಿಲ್ವ? ಬದುಕಿನಲ್ಲಿ ಆಸಕ್ತಿ ಕಳೆದುಕೊಳ್ಳುವಂತೆ ಮಾಡಿಬಿಡಲಿಲ್ವ? ಇಂಥವೇ ಕುತೂಹಲಕರ ಪ್ರಶ್ನೆಗಳನ್ನು ಜತೆಗಿಟ್ಟುಕೊಂಡು ಕುಳಿತರೆ, ಅದಕ್ಕೆ ಉತ್ತರವಾಗಿ ನಿಕ್ ಜಿಸಿಕ್ನ ಬದುಕಿನ ಕಥೆ ಈರುಳ್ಳಿಯ ಪಕಳೆಗಳಂತೆ ಬಿಚ್ಚಿಕೊಳ್ಳತೊಡಗುತ್ತದೆ. *** ನಿಕ್ಜಿಸಿಕ್ ಹುಟ್ಟಿದ್ದು 1982ರಲ್ಲಿ, ಆಸ್ಟ್ರೇಲಿಯಾದ ಮೆಲ್ಬರ್ನ್ನಲ್ಲಿ. |
|
|
| |
|
|